ವಾಸ್ತುವನ್ನು ಬಹಳ ನಂಬುವ ಕೋಮಲ್ಗೆ ನಿಜ ಎನಿಸಿದೆಯಂತೆ. ಸತತ ಸೋಲುಗಳು ಕಂಡುಬಂದಿದ್ದು ಮನೆಯಲ್ಲಿ ವಾಸ್ತು ಸರಿ ಇಲ್ಲ ಎಂಬುದು ಮನವರಿಕೆಯಾಗಿದೆ. ಅದಕ್ಕೆಂದೆ ಅದೇ ಪ್ರಕಾರ ರಿಪೇರಿ ಮಾಢಿಸುತ್ತಿರುವಾಗ ಮೊದಲ ಶುಭ ಸಂಕೇತ ಕತೆ,ಚಿತ್ರಕತೆ,ನಿರ್ದೇಶನ,ಪುಟ್ಟಣ್ಣ ಚಿತ್ರದ ಯಶಸ್ಸು ನಿರಾಳ ತಂದಿದೆ ಅಂತ ಸಂತೋಷದಿಂದ ಹೇಳಿಕೊಳ್ಳುತ್ತಾರೆ. ಹಿಟ್ ಆದ ಹಿನ್ನಲೆಯಲ್ಲಿ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಮೇ ತಿಂಗಳ ಹೊತ್ತಿಗೆ ಮನೆ ಕೆಲಸ ಮುಗಿಯಬಹುದು. ಗೃಹಪ್ರವೇಶ ಮಾಡಿ ನಂತರ ಕತೆಯ ಬಗ್ಗೆ ಗಮನ ಹರಿಸುವುದು ಇವರ ಸದ್ಯ ಅಜೆಂಡಾ. ಯಶಸ್ಸಿನಿಂದ ಇನ್ನಷ್ಟು ಜವಬ್ದಾರಿ ಹೆಚ್ಚಿದೆ. ಪ್ರತಿ ಚಿತ್ರವು ಫ್ಲಾಪ್ ಆದಾಗ ಎಲ್ಲರಿಗಿಂತ ಮನಸ್ಸನ್ನು ಕೆಡಿಸಿಕೊಳ್ಳುವುದು ಕೋಮಲ್ ಎಂಬುದು ಗಾಂದಿನಗರಕ್ಕೆ ತಿಳಿದಿರುವ ವಿಷಯ. ಇದನ್ನು ಅವರಿಗೆ ಹೇಳಿದರೆ ಸಣ್ಣದೊಂದು ನಗು ಚೆಲ್ಲುತ್ತಾರೆ.
ಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡಿದ್ದರಿಂದ ದೇಹದ ಕಡೆ ಗಮನ ಹರಿಸಲಾಗಲಿಲ್ಲ. ಈಗ ಬಿಡುವು ಮಾಡಿಕೊಂಡು ಕೃಶ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿ ವ್ಯಾಯಾಮ ಮಾಡಿ ದೇಹವನ್ನು ದಂಡಿಸಿ,ಆಹಾರದಲ್ಲಿ ಪಥ್ಯ ಮಾಡಲಾಗಿದೆ. ಇದರ ಫಲಿತಾಂಶ ಆರು ಕೆಜಿ ತೂಕ ಇಳಿಕೆ. ಆದರೂ ಸಮಾಧಾನವಿಲ್ಲ. ಇನ್ನು ಆರು ಕೆ.ಜಿ ಇಳಿಸಬೇಕಂಬ ಧ್ಯೇಯವನ್ನು ಇಟ್ಟುಕೊಂಡು ಅದನ್ನು ಸಾಧಿಸಿಸುತ್ತೇನೆ ಎಂಬ ಅಚಲ ವಿಶ್ವಾಸದಲ್ಲಿ ಇದ್ದಾರೆ. ಮುಖದಲ್ಲಿ ಕಳೆ ತುಂಬಿಕೊಂಡಿರುವ ಕೋಮಲ್ರವರ ಹೊಸ ಚಿತ್ರದ ಸುದ್ದಿಯನ್ನು ಕೇಳಬೇಕಾದರೆ ಅದು ಜೂನ್ವರೆಗೂ ಕಾಯಬೇಕಾಗಬಹುದು.